Slide
Slide
Slide
previous arrow
next arrow

ಮದ್ಯವರ್ಜನ ಶಿಬಿರಾರ್ಥಿಗಳ ಮಾಸಿಕ ಸಭೆ ಯಶಸ್ವಿ

300x250 AD

ಹೊನ್ನಾವರ: ಜಿಲ್ಲೆಯ ಹೊನ್ನಾವರ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ನಡೆದ 1920ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳ ಮಾಸಿಕ ಸಭೆಯು ಶ್ರೀ ಮೂಡಗಣಪತಿ ದೇವಸ್ಥಾನ ಸಭಾಂಗಣ ಪ್ರಭಾತನಗರದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರು ವಿವೇಕ್‌ ವಿನ್ಸೆಂಟ್‌ ಪಾಯಸ್‌ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ನಂತರ ಅವರು ಸಭೆಯಲ್ಲಿ ಭಾಗವಹಿಸಿದ ನವಜೀವನ ಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರನ್ನು ಉದ್ದೇಶಿಸಿ ನವಜೀವನ ಸಮಿತಿ ಸಭೆಯ ಮಹತ್ವ, ಪ್ರೀ ಕಾನ್ಫರೆನ್ಸ್‌ ಕಾಲ್‌ನಲ್ಲಿ ಭಾಗವಹಿಸುವ ಕುರಿತಂತೆ ಮಾಹಿತಿ ನೀಡಿದರು. ಶಿಬಿರದ ಯಶಸ್ವಿಗಾಗಿ ದುಡಿದ ವ್ಯವಸ್ಥಾಪನ ಸಮಿತಿ ಶಾಲಾ ಆಡಳಿತ ಮಂಡಳಿಯವರಿಗೆ ಸ್ವಯಂ ಸೇವಕರಾಗಿ ದುಡಿದವರಿಗೆ ಕೃತಜ್ಞತೆ ಸಲ್ಲಿಸಿದರು. 56 ರಲ್ಲಿ 56 ಸದಸ್ಯರು ಕುಡಿತ ಬಿಟ್ಟು ಸಭೆಯಲ್ಲಿ ಭಾಗವಹಿಸಿದ ಕುರಿತು ಹರ್ಷ ವ್ಯಕ್ತಪಡಿಸಿ ಶತದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು. ಈ ವೇದಿಕೆಯಲ್ಲಿ ವ್ಯವಸ್ಥಪನಾ ಸಮಿತಿ ಸದಸ್ಯರಾದ ಶಿವರಾಜ್‌ ಮೇಸ್ತ, ಶ್ರೀಮತಿ ಮೇದಾ ನಾಯ್ಕ, ರಾಮಚಂದ್ರ ನಾಯ್ಕ ರವರು ಶುಭ ಹಾರೈಸಿದರು. ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾಕಾರಿಗಳಾದ ಗಣೇಶ್‌ ಆಚಾರ್ಯ, ಸಮಿತಿವಾರು ಹಾಜರಾತಿಯನ್ನು ಮಾಡಿ ಪಾನಮುಕ್ತ ಸದಸ್ಯರು ಮಾಡಿದ ಸಾಧನೆಯ ವಿವರಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಜೀವನ ನಡೆಸುವ ಕ್ರಮಗಳನ್ನು ತಿಳಿಸಿಕೊಟ್ಟರು. ಭಾಗವಹಿಸಿದ ಎಲ್ಲಾ ನವಜೀವನ ಸಮಿತಿ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭ ಎಲ್ಲಾ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ಶೌರ್ಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿಗಳು ಜಯವಂತ್‌ ಪಟಗಾರ್‌, ಕಿಶೋರ್‌, ಶಿಬಿರಾಧಿಕಾರಿ ಕುಮಾರ್‌ ಟಿ., ನವಜೀವನಸಮಿತಿ ಸದಸ್ಯರು ಮತ್ತು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top